ಶುಕ್ರವಾರ, ನವೆಂಬರ್ 27, 2020

ಕವನ- ೨ 'ಜ್ಯೋತಿ'




ಉರಿಯುತ್ತ ಪ್ರಜ್ವಲಿಪ ನಾನು ಜ್ಯೋತಿ

ಕರಗುತ್ತ ಪ್ರಜ್ವಲಿಪ ನಾನು ಜ್ಯೋತಿ

ಉರಿಯುತ್ತ ಕರಗಿದರು ನನಗದುವೆ ತೃಪ್ತಿ

ಬೇಡುವೆನು ದೇವರಲಿ ಜಗದಗಲ ವ್ಯಾಪ್ತಿ ||

                ಕತ್ತಲಲಿ ಮೂಡಿಸುವೆ ಬೆಳಕಿನ ಅಸ್ಥಿತ್ವ

                ಮನದ ಕತ್ತಲೆಯನು ನೂಕುವೆಯಾ ನಿತ್ಯ

                ಜಗವೆ ಮುಖ ಮಾಡಿಹುದು ಬೆಳಕಿನತ್ತ

                ಅದ ಕಳೆದ ಮೇಲೆ ಎಲ್ಲವೂ ಮೌನದತ್ತ ||

ಲವಲೇಷ ತೋರುವುದು ಇರುವಷ್ಟು ಹೊತ್ತು

ಆರಿಹೋದರೇನು ಮರಳಿ ಮೂಡುವುದು ಹೊತ್ತು

ತಾನುರಿದು ಜಗವನ್ನೆ ಬೆಳಗಿಸುವ ಬತ್ತಿ

ಈ ಮಾಯೆಯಲಿ ಇದುವೆ ಪ್ರತ್ಯಕ್ಷ ಶಕ್ತಿ ||

                                                - ಚರಣ್ ರಾಜ್ ಯಡಾಡಿ

ಪದಗಳ ಅರ್ಥ

1. ಪ್ರಜ್ವಲಿಪ = ಪ್ರಕಾಶಿಸುವ

2. ವ್ಯಾಪ್ತಿ = ವಿಶಾಲತೆ

3. ಅಸ್ಥಿತ್ವ = ಇರುವಿಕೆ

4. ಲವಲೇಷ = ಉಳಿದ ಭಾಗ, ಶೇಷ, ಉಳಿಕೆ

5. ಪ್ರತ್ಯಕ್ಷ = ಕಣ್ಣಿಗೆ ಕಾಣುವ, ನೇರ

1 ಕಾಮೆಂಟ್‌:

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...