ಮೂಡಣದಿ ಬಾನು ರಂಗೇರುತಿರುವಾಗ
ಅರುಣನ ದರ್ಶನವು ಸೂರ್ಯನ ಜೊತೆಗಾಗ
ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು
ಬರಿಗಣ್ಣಿಗದುವೆ ಬರಿಯ ಬೆಳಗಾಗಿಹುದು ||
ಮೌನದಿಂ ಜೀವಿಗಳು ಎಚ್ಚೆತ್ತುಕೊಂಡಿರಲು
ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು
ಮಾನವನ ದಿನಚರಿಯು ಮನದಿ ಭುಗಿಲೆದ್ದಿಹುದು
ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||
ರಾತ್ರಿ ಮೌನವ ಕಳೆದು ಚೀರಾಟದೆಡೆಗಳಲಿ
ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ
ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ
ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ. ||
- ಚರಣ್ ರಾಜ್ ಯಡಾಡಿ
ಪದಗಳ ಅರ್ಥ
ರಂಗೇರು = ಕೇಸರಿ ಬಣ್ಣಕ್ಕೆ ತಿರುಗು
ಅರುಣ = ಸೂರ್ಯನ ಸಾರಥಿ
ಇಂಚರ =ಇಂಪಾದ ಧ್ವನಿ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ