ಭಾನುವಾರ, ನವೆಂಬರ್ 29, 2020

ಕನ್ನಡ ವರ್ಣಮಾಲೆ-ಚರಣ್ ರಾಜ್ ಯಡಾಡಿ. History Of Kannada_alphabet-Charanraj_yadady

ಕನ್ನಡ ಭಾಷೆಯ ಪ್ರಾಚೀನತೆ, ಅದರ ಇತಿಹಾಸ, ವಿವಿಧ ರಾಜರ ಕಾಲದಲ್ಲಿ ಕನ್ನಡದ ಲಿಪಿಯ ವೈವಿಧ್ಯತೆ.

 ಕನ್ನಡದ ವರ್ಣಮಾಲೆಯ ಸರಳ, ಸವಿಸ್ತಾರವಾದ ವಿವರಣೆ.
 

ಕನ್ನಡ ಭಕ್ತಿಗೀತೆಗಳು. Kannada_Devotional songs

ಭಕ್ತಿಗೀತೆಯ ಸವಿಯನ್ನು ಸವಿಯಲು ಈ ವೀಡಿಯೋ ಮೇಲೆ ಕ್ಲಿಕ್ಕಿಸಿ.


ಮನೋರಂಜನೆಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ.... 

https://www.youtube.com/playlist?list=PLgaAsYGxhlXqtCgur7coTGfg1YNbpiNkH 

ಶುಕ್ರವಾರ, ನವೆಂಬರ್ 27, 2020

ಕನ್ನಡ ವ್ಯಾಕರಣ ಪಾಠಗಳು.



https://www.youtube.com/playlist?list=PLgaAsYGxhlXpe9_xyuvyzoF3K8eqhslxZ 

ವರ್ಣಮಾಲೆ
ಸಂಧಿಗಳು
ಸಮಾಸಗಳು
ಕ್ರಿಯಾಪದಗಳು
ವಿಭಕ್ತಿಗಳು
ನಾಮಪದಗಳು
ಛಂದಸ್ಸು
ಅಲಂಕಾರಗಳು
ಅರ್ಥರೂಪ ಕ್ರಿಯಾಪದಗಳು

ಈ ಮೇಲಿನ ಲಿಂಕ್ ಬಳಸಿ ನಿಮ್ಮ ನೆಚ್ಚಿನ ವ್ಯಾಕರಣ ಪಾಠಗಳನ್ನು ಸರಳವಾದ ಸೂತ್ರ ಹಾಗೂ ವ್ಯಾಖ್ಯಾನಗಳ ಮೂಲಕ ತಿಳಿಯಿರಿ.

ಕವನ- ೨ 'ಜ್ಯೋತಿ'




ಉರಿಯುತ್ತ ಪ್ರಜ್ವಲಿಪ ನಾನು ಜ್ಯೋತಿ

ಕರಗುತ್ತ ಪ್ರಜ್ವಲಿಪ ನಾನು ಜ್ಯೋತಿ

ಉರಿಯುತ್ತ ಕರಗಿದರು ನನಗದುವೆ ತೃಪ್ತಿ

ಬೇಡುವೆನು ದೇವರಲಿ ಜಗದಗಲ ವ್ಯಾಪ್ತಿ ||

                ಕತ್ತಲಲಿ ಮೂಡಿಸುವೆ ಬೆಳಕಿನ ಅಸ್ಥಿತ್ವ

                ಮನದ ಕತ್ತಲೆಯನು ನೂಕುವೆಯಾ ನಿತ್ಯ

                ಜಗವೆ ಮುಖ ಮಾಡಿಹುದು ಬೆಳಕಿನತ್ತ

                ಅದ ಕಳೆದ ಮೇಲೆ ಎಲ್ಲವೂ ಮೌನದತ್ತ ||

ಲವಲೇಷ ತೋರುವುದು ಇರುವಷ್ಟು ಹೊತ್ತು

ಆರಿಹೋದರೇನು ಮರಳಿ ಮೂಡುವುದು ಹೊತ್ತು

ತಾನುರಿದು ಜಗವನ್ನೆ ಬೆಳಗಿಸುವ ಬತ್ತಿ

ಈ ಮಾಯೆಯಲಿ ಇದುವೆ ಪ್ರತ್ಯಕ್ಷ ಶಕ್ತಿ ||

                                                - ಚರಣ್ ರಾಜ್ ಯಡಾಡಿ

ಪದಗಳ ಅರ್ಥ

1. ಪ್ರಜ್ವಲಿಪ = ಪ್ರಕಾಶಿಸುವ

2. ವ್ಯಾಪ್ತಿ = ವಿಶಾಲತೆ

3. ಅಸ್ಥಿತ್ವ = ಇರುವಿಕೆ

4. ಲವಲೇಷ = ಉಳಿದ ಭಾಗ, ಶೇಷ, ಉಳಿಕೆ

5. ಪ್ರತ್ಯಕ್ಷ = ಕಣ್ಣಿಗೆ ಕಾಣುವ, ನೇರ

ಕವನ - ೧ 'ಸೂರ್ಯೋದಯ'

 


ಮೂಡಣದಿ ಬಾನು ರಂಗೇರುತಿರುವಾಗ

ಅರುಣನ ದರ್ಶನವು ಸೂರ್ಯನ ಜೊತೆಗಾಗ

ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು

ಬರಿಗಣ್ಣಿಗದುವೆ ಬರಿಯ ಬೆಳಗಾಗಿಹುದು ||

                    ಮೌನದಿಂ ಜೀವಿಗಳು ಎಚ್ಚೆತ್ತುಕೊಂಡಿರಲು

                    ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು

                    ಮಾನವನ ದಿನಚರಿಯು ಮನದಿ ಭುಗಿಲೆದ್ದಿಹುದು

                    ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||

ರಾತ್ರಿ ಮೌನವ ಕಳೆದು ಚೀರಾಟದೆಡೆಗಳಲಿ

ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ

ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ

ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ. ||

                                                    - ಚರಣ್ ರಾಜ್ ಯಡಾಡಿ


ಪದಗಳ ಅರ್ಥ

ರಂಗೇರು = ಕೇಸರಿ ಬಣ್ಣಕ್ಕೆ ತಿರುಗು

ಅರುಣ = ಸೂರ್ಯನ ಸಾರಥಿ

ಇಂಚರ =ಇಂಪಾದ ಧ್ವನಿ

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...